Sunday, August 15, 2010

Mamas and Babies: Postpartum Belly Binding

Mamas and Babies: Postpartum Belly Binding: "The concept behind belly binding is to support the muscles and skin of a woman's midsection after having a baby. I know all too well how lo..."

Friday, April 16, 2010

::apara::: ಎಲ್ಲರಿಗೂ ಇಷ್ಟವಾಗುವಂಥ ಒಂದು ಪುಸ್ತಕ

::apara::: ಎಲ್ಲರಿಗೂ ಇಷ್ಟವಾಗುವಂಥ ಒಂದು ಪುಸ್ತಕ

Saturday, February 06, 2010

Kannada Pustaka



ಹೀಗೊಂದು ಬ್ಲಾಗ್ ಇದೆ. ಇದರಲ್ಲಿ ಶ್ರೀಯುತ ಡಾ. ಜೆ. ಬಾಲಕೃಷ್ಣ ರವರು ತಮ್ಮ ಕೃತಿಗಳನ್ನು ಉಚಿತವಾಗಿ download ಮಾಡಿಕೊಳ್ಳಲು ಅವಕಾಶವನ್ನಿತ್ತಿದ್ದಾರೆ. ಇವರ ಪುಸ್ತಕಗಳು ಆಸಕ್ತಿ ಕೆರೆಳಿಸುವಂತಿದೆ.

http://kannadapustaka.blogspot.com/

Just ಮಾತ್ ಮಾತಲ್ಲಿ


Just ಮಾತ್ ಮಾತಲ್ಲಿTechnically ತುಂಬಾ brilliant ಆಗಿದೆ.
ಹಾಡುಗಳು ಪ್ಲಸ್ ಪಾಯಿಂಟ್.
Re-recording ಅದ್ಭತವಾಗಿ ಮೂಡಿ ಬಂದಿದೆ.
ರಾಮ್ ಗೋಪಾಲ್ ವರ್ಮ Factory ಇಂದ ತುಂಬಾ ಕಲಿತಿದ್ದಾರೆ ನಿರ್ದೇಶಕರು.
Camera angles; ನೆರಳು-ಬೆಳಕಿನ ಸಂಯೋಜನೆ apt ಆಗಿದೆ.
ಸಿನೆಮಾ ಶುರುವಿನಲ್ಲಿ ರಾಜೇಶ್(ಆದಿ) ತುಂಬಾ ಕಾಟ ಕೊಡ್ತಾರೆ. ಅದು ನಿರ್ದೇಶಕರ ಗೆಲವು.
ಚಿತ್ರದ Marketing ನವ-ನವೀನ.
ಚಿತ್ರದ heroಗಳು ಅಂದರೆ-  ನಿರ್ದೇಶಕ
                             ನಾಯಕ ಸಿದ್ಧಾರ್ಥ್
                             ರಘು ದೀಕ್ಷಿತ್(ಸಂಗೀತ)
                             ಶ್ರೀವೆಂಕಟ್(ಛಾಯಾಗ್ರಹಣ)
                             ರೋಹಿತ್(ಚಿತ್ರಕತೆ-ಸಂಭಾಷಣೆ)
                             ಅರುಣ್ ಸಾಗರ್(ಕಲೆ)
ತೀರಾ simple ಕಥೆಯನ್ನು ನಿರ್ದೇಶಕರು ಅದ್ಭುತವಾಗಿ present ಮಾಡಿದ್ದಾರೆ.
ಇದು ನಮ್ಮ ನಡುವೆಯೇ ನಡೆಯುವ ಕಥೆ. ನಾಯಕ ಸಿದ್ಧಾರ್ಥ್ ಜೊತೆ ನಾವು ನಮ್ಮನ್ನ identify ಮಾಡ್ಕೋತೀವಿ.
ಪಟ್-ಪಟ್ ಅಂತ ಅರಳು ಹುರಿದಂತೆ ಮಾತಾಡುವ ನಾಯಕಿ ತನು ಇಷ್ಟವಾಗ್ತಾಳೆ.
ಕೆಲವೊಂದು ಕಡೆ melodrama ಅಂತ ಅನ್ನಿಸಿದರೂ, no complaints.
Just ಮಾತ್ ಮಾತಲ್ಲಿ ಎಲ್ಲಾ ಹೇಳಲಾಗದು. ಕೆಲವೊಂದು ಭಾವನೆಗಳಿಗೆ ಮಾತಿಲ್ಲ. ಮೌನವೇ ಸೂಕ್ತ. ಇದನ್ನು ಅತ್ಯಂತ ಶ್ರದ್ಧೆಯಿಂದ ಬಹಳ ತೀವ್ರವಾಗಿ ತೆರೆ ಮೇಲೆ ತಂದಿದ್ದಾರೆ ನಿರ್ದೇಶಕರು.
ರಘು ದೀಕ್ಷಿತ್ ಮತ್ತೊಮ್ಮೆ ಮಿಂಚಿದ್ದಾರೆ. ಹಾಡುಗಳು, re-recording ನವ್ಯ. ಹಾಡಿನ ಸಾಹಿತ್ಯದಲ್ಲೂ ತಮ್ಮ ಪ್ರತಿಭೆ ತೋರಿದ್ದಾರೆ.
ಈ ಚಿತ್ರದ ಸಂಗೀತದ ಬಗ್ಗೆ ಅವಶ್ಯವಾಗಿ ಹೇಳಲೇಬೇಕಾದ ಮುಖ್ಯವಾದ ಸಂಗತಿ ಅಂದ್ರೆ ಈ ಚಿತ್ರದಲ್ಲಿ ಕನ್ನಡದ ಗಾಯಕರು ದನಿ ನೀಡಿದ್ದಾರೆ. ಕನ್ನಡ ಚಿತ್ರ ಗೀತೆಗಳು ಸೋನು ನಿಗಮ್ ರ ಅಸ್ಪಷ್ಟ ಉಚ್ಚಾರದಿಂದ ಅಸಹ್ಯ ಹುಟ್ಟಿಸುವಷ್ಟು ಬಾಡಿ ಹೋಗಿತ್ತು.
Just ಮಾತ್ ಮಾತಲ್ಲಿ ಗೀತ ಸಾಹಿತ್ಯ-ಸಂಗೀತ ಹೊಸದೊಂದು ಅಲೆ ಸೃಷ್ಠಿಸಿದೆ ಅಂದರೆ ತಪ್ಪಾಗಲಾರದು. ಶ್ರೀಯುತ ಹಂಸಲೇಖಾ ಹೇಳುವಂತೆ ರಘು ದೀಕ್ಷಿತ್ trend-setter. ಎಲ್ಲಾ ಹಾಡುಗಳು ಅದ್ಭುತ ಸೃಷ್ಠಿ. ಅದರಲ್ಲೂ ಮುಂಜಾನೆ ಮಂಜಲ್ಲೂ ಹಾಡು ಎದೆಯ ನವಿರಾದ ಭಾವನೆಗಳನ್ನು-ಹಳೆಯ ಪ್ರೇಮದ ನೆನಪುಗಳನ್ನು ನೆನಪಿಸುತ್ತೆ- ಹೀಗೆ just ಮಾತ್ ಮಾತಲ್ಲಿ……..

ಈ ಚಿತ್ರ ಖಚಿತವಾಗಿ ಎಲ್ಲಾರಿಗೂ ಇಷ್ಟವಾಗಲಾರದು. ಸುದೀಪ್ ಅಭಿಮಾನಿಗಳಿಗೆ ನಿರಾಶೆ ಆಗಬಹುದು.
ಆದರೆ, at the end of the day, ಸುದೀಪ್ ನಿರ್ದೇಶಕನಾಗಿ ಗೆಲ್ತಾರೆ. ನಟನಾಗಿ ಗೆಲ್ತಾರೆ. ಚಿತ್ರಕತೆಯಲ್ಲಿ ಗೆಲ್ತಾರೆ. ಪ್ರತಿಯೊಂದು frame ಅನ್ನು ತುಂಬಾ ಇಷ್ಟಪಟ್ಟು ಮಾಡಿದ್ದಾರೆ.

Tuesday, February 02, 2010

ಪುಟ್ಟಕ್ಕನ ಮೆಡಿಕಲ್ ಕಾಲೇಜು


ಈ ಕಥೆ ಸುಮಾರು ಎರಡು ದಶಕಗಳಷ್ಟು ಹಳೆಯದು. ಹಿಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಲೇಖಕರೇ ಹೇಳುವಂತೆ ಕಥೆ 
ಕಾಲಾತೀತವಾಗಿರಬೇಕು. ಹಾಗಿದ್ದರೆ ಅವು ಚಿರಾಯು.

ಇವತ್ತಿನ ಸಮಾಜದ ನಿಜ ಸ್ವರೂಪ ಈ ಕಥೆಯಲ್ಲಿ ಚಿತ್ರಿತವಾಗಿದೆ. ಇಂದು ರೈತ ಅತಂತ್ರವಾಗಿದ್ದಾನೆ. ಆತ ಕೃಷಿಯಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ. ಕಷ್ಟ ಪಟ್ಟು ದುಡಿದು ಅದರ ಫಲ ತಿಂದುಂಡು ಸುಖವಾಗಿರುವ ಮನಃಸ್ಥಿತಿಯಲ್ಲಿ ಇವತ್ತು ರೈತನಿಲ್ಲ. ಆತನಿಗೆ ತನ್ನ ಜಮೀನು ಮಾರುವ ಉಮೇದು. ಸರಿಯಾದ ಬೆಲೆ ಸಿಗದೆ ಅದನ್ನು ಬಿಸಾಡುವ ಬದಲು ತನ್ನ ಜಮೀನನ್ನು ಮಾರಿ ಅದರಿಂದ ಬರುವ “ಖಚಿತ ಧನ”ಕ್ಕಾಗಿ ಆಸೆ ಪಡ್ತಾನೆ. ಚಿನ್ನದ ಮೊಟ್ಟೆ ಇಡುವ ಕೋಳಿ ಕಥೆಯಂತೆ. ರೈತ ತನ್ನ ಬೆಳೆಗೆ ತಕ್ಕ ಬೆಲೆ ನಿಗದಿ ಪಡಿಸೋದಿಲ್ಲ. ಇದನ್ನು ಮಧ್ಯವರ್ತಿಗಳು ಅದ್ಭುತವಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ.  ಇದೇ ಆಶಯವನ್ನಿಟ್ಟುಕೊಂಡು ಲೇಖಕರು ತಮ್ಮ ಚಿತ್ರ “ಮಾತಾಡ್ ಮಾತಾಡು ಮಲ್ಲಿಗೆ” ಯಲ್ಲಿ ತೆರೆಗೆ ತಂದಿದ್ದಾರೆ.

ಈ ಕಥೆಯಲ್ಲಿ ನಮ್ಮ ಕಥಾನಾಯಕಿ ಪುಟ್ಟಕ್ಕ ಅಸಾಹಯಕ ಹೆಣ್ಣು(ರೈತ). ಆಕೆಗೊಂದಿಷ್ಟು ಜಮೀನಿದೆ. ಅದೂ ಹೈವೆ ರಸ್ತೆಯ ಬಳಿ.ಇಲ್ಲಿ ಪುಟ್ಟಕ್ಕ ಶೋಷಿತ ಮಹಿಳೆಯರ ಪ್ರತಿನಿಧಿಯಂತೆ ಕಾಣುತ್ತಾಳೆ. ಅದೇ ಪಾತ್ರಕ್ಕೆ ಪುರುಷ ಆಯಾಮ ಹಚ್ಚಿ ……….ಮಲ್ಲಿಗೆಯಾಗಿಸಿದ್ದಾರೆ ಲೇಖಕರು.

ಆಕೆಯ ಜಮೀನನ್ನು ಕಬಳಿಸಿ ಅಲ್ಲೊಂದು ಮೆಡಿಕಲ್ ಕಾಲೇಜು ಕಟ್ಟುವ ಮಹತ್ವಾಕಾಂಕ್ಷಿ ಅಲ್ಲಿಯ ಸ್ವಾಮಿಗಳದು. ಸ್ವಾಮಿಗಳು-ಮಠಗಳು ದೇವರ-ಜಾತಿಯ ಹೆಸರಲ್ಲಿ ಮಾಡುತ್ತಿರುವ-ಮಾಡುವ ಅನ್ಯಾಯ ಅಕ್ರಮಗಳು ಕಾಲಾತೀತ. ತನ್ನ ಜಮೀನನ್ನು ಉಳಿಸಿಕೊಳ್ಳಲು ಪಡಬಾರದ ಪಾಡು ಪಡುವ ಅನಕ್ಷರಸ್ಥೆ ಪುಟ್ಟಕ್ಕ ಕೊನೆಗೂ ವಿಫಲಳಾಗುತ್ತಾಳೆ. ಅವಳ ಜಮೀನನ್ನು ಕಬ್ಜಾ ಮಾಡಿ ಅಲ್ಲೊಂದು “ಕಟ್ಟಡ” ನಿರ್ಮಿಸಿ ಅದಕ್ಕೆ “ಕಾಲೇಜು” ಎಂದು ನಾಮಕರಣ ಮಾಡುಲು ಘನ ಮುಖ್ಯಮಂತ್ರಿಗಳನ್ನು ನಮ್ಮ ಸ್ವಾಮೀಜಿ ಆಹ್ವಾನಿಸುತ್ತಾರೆ.

ಇವತ್ತಿನ ವಾಸ್ತವಕ್ಕೆ ಕನ್ನಡಿಯಾಗಿ ಈ ಕತೆ ನಿಲ್ಲುತ್ತದೆ. ಎಲ್ಲಾ ಕಾಲಕ್ಕೂ ಸಲ್ಲುವಂತ ಕಥೆಯಾಗಿ ಹೊರ ಹೊಮ್ಮುತ್ತದೆ.
ಈ ಕಥೆ “ಸನ್ನಿಧಿ” ಕಥಾ ಸಂಕಲನದ್ದು. ಅದು ಅಭಿವ್ಯಕ್ತಿಯ ಮೂಲಕ ಮತ್ತೊಮ್ಮೆ ಪ್ರಕಟವಾಗಿದೆ.

ಪ್ರಥಮ ಮುದ್ರಣ:1990
ಮತ್ತೆ ಪ್ರಕಾಶಿಸಿದ್ದು:2009
ಲೇಖಕರು: ನಾಗತಿಹಳ್ಳಿ ಚಂದ್ರಶೇಖರ

Wednesday, January 13, 2010

We Donate Blood

Dear Friends,

Greetings for the day.
Donating “blood” is the greatest help rendered to the mankind till date. There’s no other alternative found by advance sciences for blood. Blood can only be replaced by blood. I’m in the process of creating a database of donors so that this will be helpful to the needy.

Kindly send in your details

Name:
Date of Birth:
Blood Group:
Contact Number:
Location:

Also, spread this message amongst your network/company.
Come join hands to the noble cause.

Donate Blood; Save Lives
Donate Blood or else anyhow mosquitoes will suck it



You can contact me @
abhijithkshyam@gmail.com
9739274590




Thursday, December 31, 2009

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

ಲೇ:ಅನು
ಸಂ:ಅಭಿ

ಸಿ. ಅಶ್ವತ್ಥ:: ಒಂದು ಭಾವಪೂರ್ಣ ಶ್ರದ್ಧಾಂಜಲಿ

“ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ…….” ಪ್ರೇಮದ ಅನುಭವ ಇಲ್ಲದವರಿಗೂ ಈ ಅದ್ಭುತ ಲೋಕದ ಪ್ರಯಾಣ ಮಾಡಿಸುವ ಹಾಡು; ಆ ಪ್ರೇಮ ಸಮುದ್ರದ ದರ್ಶನ ಮಾಡಿಸುವ ಆ ದನಿ ನೀಲಾಕಾಶ ಮೀರಿ ಅನುರಣಿಸುತ್ತಲೇ ಇರುತ್ತದೆ. “ಅಲೆಯಿಡುವ ಮುತ್ತಿನಲೇ ಕಾಣುವುದು ನಿನ್ನೊಲುಮೆ……” ದೇವ ಮಂದಿರದಂತೆ ಪ್ರೀತಿಯಿಂದ ಪುನೀತವಾಗಿದೆ ಮನಸಿನೊಳಗೂ. ಎಷ್ಟು ಸಹಜ ದನಿಯಲ್ಲಿ ಹೇಳಿ ಬಿಡುತ್ತಾರೆ.


ದೂರದ ಊರಿನಲ್ಲೇ ಉಳಿದ ಪತಿಯ ನೆನಪಿನಲ್ಲಿ, ತವರ ಸಂಭ್ರಮದಲ್ಲಿ ಇದ್ದೂ ಇರಲಾರದ ತುಮುಲದ ಚಿತ್ರ “ಬಳೆಗಾರ ಚೆನ್ನಯ್ಯ” ನದು. ಮಾಂತ್ರಿಕ ಧ್ವನಿಯಲ್ಲಿ “ಮುನಿಸು ಮಾವನ ಮೇಲೆ; ಮಗಳೇನ ಮಾಡಿದಳು” ಎಂದು ಘಟ್ಟಿಸಿ ಕೇಳಿದಾಗ ಯಾವ ಪತಿರಾಯನಿಗೂ ಕೋಪ ಅಳಿದು ಹೋಗಬೇಕು.


ಏನೆಲ್ಲಾ ಕಷ್ಟ-ಕೋಟಲೆ ಇದ್ದರೂನೂ ಸೂರ್ಯ ಹುಟ್ಟಿ ಬರುವ ಭರವಸೆ ನಮಗಿತ್ತು. “ಕೋಡಗನ ಕೋಳಿ ನುಂಗಿತ್ತಾ….” “ತರವಲ್ಲ ತಗಿ ನಿನ್ನ ತಂಬೂರಿ…” “ಸೋರುತಿಹುದು ಮನೆಯ ಮಾಳಿಗೆ…” ಎನ್ನುತ್ತಾ ತತ್ವಗಳನ್ನು ಕೇಳಿಸುತ್ತಿದ್ದ ಅಮೋಘ ಧ್ವನಿ ನಿತ್ಯ ನೂತನ- ನಿತ್ಯ ನಿರಂತರ ಎಂದು ನೆಮ್ಮದಿಯಲ್ಲೇ ಇದ್ದು ಬಿಟ್ಟವಲ್ಲ? ಆ ಧ್ವನಿ ಮುಂದೊಮ್ಮೆ ನೀರವವಾಗಬಹುದೆಂಬ ಯೋಚನೆಯೂ ಇಲ್ಲದಂತೆ.


“ಬಾ ಇಲ್ಲಿ ಸಂಭವಿಸು!” ಎಂತಹ ಹಾಡು!! ಎಂತಹ ಬೇಡಿಕೆ….. ಸಿ. ಅಶ್ವತ್ಥ್ ಮತ್ತೆ ಮತ್ತೆ ಇಲ್ಲಿ ಆವಿರ್ಭಾವಿಸಬೇಕು. ತುಂಬು ಜೀವನ ನಡೆಸಿದ ಆ ಚೇತನದ ಸ್ವರ ಗಂಗೆ ನಮ್ಮ ಮನ-ಮನೆಗಳನ್ನು ಆರ್ದ್ರವಾಗಿಸಬೇಕು.